Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.
ಇಲ್ಲಿ ಇರಾವತಿ ಕರ್ವೆಯವರ ಒಟ್ಟು ಎಂಟು ಲೇಖನಗಳಿವೆ. ಕೊನೆಯಲ್ಲಿ ಮರಾಠಿಯ ಖ್ಯಾತ ವಿಮರ್ಶಕರಾದ ನರಹರ ಕುರಂದಕರ ಅವರ ಲೇಖನವೂ ಇದೆ. ತುಂಬ ಸುದೀರ್ಘವಾದ ಈ ಲೇಖನವನ್ನು ಇರಾವತಿ ಕರ್ವೆಯ ಸಾವಿನ ನಂತರ ಬರೆದದ್ದು. ಅದಕ್ಕೆ ಅವರು "ಶ್ರದ್ಧಾಂಜಲಿ' ಎಂದು ಹೆಸರಿಸಿ, ಇರಾವತಿಯವರ ಈ ಮರುವ್ಯಾಖ್ಯಾನದ ಇತಿಮಿತಿಗಳ ಪರಾಮರ್ಶೆ ಕೈಕೊಂಡಿದ್ದಾರೆ. ಈ ಲೇಖನ ಅತ್ಯಂತ ಪ್ರಬುದ್ಧವೂ, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿ, ಆಳವಾದ ಚಿಂತನೆಗೆ ಒಡ್ಡುವಷ್ಟು ಪ್ರಖರವೂ ಆಗಿದೆ.