Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.
ವೆಲ್ಲೂರಿನ ಕೇಂದ್ರ ಸೆರೆಮನೆ. ಅನೇಕ ಸ್ವಾತಂತ್ರ್ಯದ ಹೋರಾಟಗಾರರನ್ನು ಅಲ್ಲಿ ಬಂಧಿಸಿಡಲಾಗಿತ್ತು. 1931ನೆಯ ಇಸವಿಯ ಕೊನೆಕೊನೆಯ ದಿನಗಳು. ಆವಾರದಲ್ಲಿದ್ದ ಮರಗಳಡಿ ಕೆಲವರು ಕುಳಿತು ಏನನ್ನೋ ಚರ್ಚಿಸುತ್ತಿದ್ದರು.ಅಷ್ಟರಲ್ಲಿ ಕೃಶಕಾಯದ, ಕರಿ ಕನ್ನಡಕ ಧಾರಿ ವ್ಯಕ್ತಿ ಧೋತರದ ಚುಂಗನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಅಂಗಳದಲ್ಲಿ ಸಾಗುತ್ತಿದ್ದಾಗ ಮರಗಳಡಿ ಕುಳಿತವರು ಗೌರವದಿಂದ ಎದ್ದು ನಿಂತರು.
''ಈಗ ಹೋದರಲ್ಲ ಈ ವ್ಯಕ್ತಿ ಯಾರು?'' ಒಬ್ಬರು ಕೇಳಿದರು.
''ಗೊತ್ತಿಲ್ಲವೆ? ಅವರೇ ರಾಜಾಜಿ. ಭಾರತದ ಗವರ್ನರ್ ಜನರಲ್ ಹುದ್ದೆಗೆ ಏರಬಲ್ಲ ವ್ಯಕ್ತಿ'' ಎಂದು ಉತ್ತರಿಸಿದರು ಅಲ್ಲೆ ಇದ್ದ ಪ್ರೊ. ಎನ್. ಜಿ. ರಂಗಾ. ಸುಮಾರು ಹದಿನೇಳು ವರ್ಷಗಳನಂತರ ರಾಜಾಜಿ ಭಾರತದ ಗವರ್ನರ್ ಜನರಲ್ ಆದರು.